ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸಲು ಕರೆ

ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸಲು ಕರೆ

ಹರಪನಹಳ್ಳಿ, ಜು. 28 – ಬಯಲುಸೀಮೆ ಭಾಗದ ರೇಷ್ಮೆ ಬೆಳೆಗಾರರು ಬೆಳೆಯುವ ರೇಷ್ಮೆ ಗೂಡು ಉತ್ಪಾದನೆ ಹೆಚ್ಚು ಮಾಡುವುದು. ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ರೈತ ಆಸಕ್ತ ಗುಂಪುಗಳನ್ನು ರಚಿಸಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ವಿ.ಸುದೀರ್ ಹೇಳಿದರು.

ತಾಲ್ಲೂಕಿನ ಗೋವೇರಹಳ್ಳಿ  ಗ್ರಾಮದಲ್ಲಿ ರೇಷ್ಮೆ ಇಲಾಖೆ ಮತ್ತು ರೈತ ಆಸಕ್ತ ಇವರ ಸಹಯೋಗದಲ್ಲಿ ರೇಷ್ಮೆ ಉತ್ಪಾದಕ ಸಂಸ್ಥೆ ಯೋಜನೆಯ ಅಡಿಯಲ್ಲಿ  ಆಸಕ್ತ ಗುಂಪುಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೇಷ್ಮೆ ರೈತರು ತಮ್ಮ ಚಾಕಿ ಕೇಂದ್ರದ ಮೂಲಕ ಅತ್ಯುತ್ತಮ ಗುಣಮಟ್ಟದ ಹುಳುಗಳನ್ನು ಕೊಡುವುದರ  ಜೆೋತೆಗೆ ರೈತರ ತೋಟಗಳಿಗೆ ನುರಿತ ತಂಡದ ವ್ಯಕ್ತಿಗಳಿಂದ ಭೇಟಿ ನೀಡಿಸಿ ಸೂಕ್ತ ಸಲಹೆ ಸೂಚನೆಗಳನ್ನು ತಿಳಿದು ಕೊಂಡು ಉತ್ತಮವಾದ ರೇಷ್ಮೆ ಬೆಳೆಗಳ ಗೂಡುಗಳನ್ನು ಇಳುವರಿ ಪಡೆಯಲು ಸಹಕರಿಸುವುದಕ್ಕೆ ಸಹಾಯವಾಗುತ್ತದೆ ಎಂದರು. ರೈತರಿಗೆ ನೂತನ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದು ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮಧ್ಯವರ್ತಿಗಳ ಹಾವಳಿ ತಡೆಯುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಎಂದರು.

ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಎಂ.ಡಿ.ಲಕ್ಷ್ಮಿನಾರಾಯಣ,  ಇಲಾಖೆ ಅಧಿಕಾರಿ ಗಳಾದ ಕೆ. ನಾಗರಾಜ್, ಎಸ್.ಕುಮಾರ ಸ್ವಾಮಿ, ಡಾ. ಜೆ.ಸೋಮಿರೆಡ್ಡಿ, ಡಾ. ಎಂ.ಆರ್.ಸುಬ್ರಮಣಂ. ಡಾ; ನಾಗರಾಜ ಗೌಡ, ಡಾ. ಮೇಗೇರಿ ಕರಿಬಸಪ್ಪ ಡಾ; ಎಂ.ವಿ.ಕಿರಣ್ ಮಾತನಾಡಿದರು. ಗೋವೇರಹಳ್ಳಿ ಗ್ರಾಮ ಮುಖಂಡರಾದ ಕೊಟ್ರೇಶ್ ಹಿರೇ ಮಠ, ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!