ದಾವಣಗೆರೆ, ಜು. 27 – ನಗರದ ಜಿಲ್ಲಾ ಸಂಸ್ಥೆ ವತಿಯಿಂದ ಕಾರ್ಗಿಲ್ ವಿಜಯ ದಿವಸವನ್ನು ಅಮರ್ ಜವಾನ್ ಮೆಮೋರಿಯಲ್ ಪಾರ್ಕ್ನಲ್ಲಿ ಸಡಗರ ಮತ್ತು ಹೆಮ್ಮೆಯಿಂದ ಆಚರಿಸಲಾಯಿತು.
ಮುಖ್ಯ ಹಾಗೂ ವಿಶೇಷ ಅತಿಥಿಗಳಾಗಿ ನಿವೃತ್ತ ಏರ್ ಫೋರ್ಸ್ ಅಧಿಕಾರಿಗಳೂ, ಭಾರತ್ ಸ್ಕೌಟ್ ಗೈಡ್ ಮತ್ತು ಆಜೀವ ಸದಸ್ಯರೂ ಆದ ಎಂ. ಎಸ್. ರಾಮಚಂದ್ರಪ್ಪ ಅವರು ಆಗಮಿಸಿ ಸ್ಕೌಟ್ಸ್ ಮತ್ತು ಗೈಡ್ ಮಕ್ಕಳಿಗೆ ಕಾರ್ಗಿಲ್ ವಿಜಯ ದಿವಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಮಾಜಿ ಯೋಧರು ಸುರೇಶ್ ಉಪಸ್ಥಿತರಿದ್ದರು. ಶ್ರೀಮತಿ ಅನಸೂಯ ನಂದಗೋಕುಲ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಸುಖವಾನೀ ಜಿಲ್ಲಾ ಜಂಟಿ ಕಾರ್ಯದರ್ಶಿ, ಕೊಟ್ರಯ್ಯ ಸ್ಕೌಟ್ ಮಾಸ್ಟರ್, ಶ್ರೀಮತಿ ನಳಿನ ಲೇಡೀ ಸ್ಕೌಟ್ ಮಾಸ್ಟರ್ ಮತ್ತು ಯುವ ಸಮಿತಿ ಸದಸ್ಯರಾದ ಮುಸ್ತಾಫ, ನವೀನ್ ಮತ್ತು ದೀಪಕ್ ಉಪಸ್ಥಿತರಿದ್ದರು.
ಶ್ರೀ ಸಿದ್ದಗಂಗಾ ಶಾಲೆ, ನಂದಗೋಕುಲ ಶಾಲೆ ಮತ್ತು ಜೈನ್ ವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಮತ್ತು ರೇಂಜರ್ , ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ ಮತ್ತು ಬುಲ್ ಬುಲ್ಸ್ , ವಿದ್ಯಾರ್ಥಿಗಳಿಂದ ಈ ಕಾರ್ಯಕ್ರಮದ ರಂಗು ಹೆಚ್ಚಾಯಿತು ಶ್ರೀಮತಿ ಅಶ್ವಿನಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.