ಹರಿಹರ, ಜು. 27 – ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಆಗ್ರಹಿಸಿ ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ದಿಂದ ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಕಡ್ಲೆಗೊಂದಿ ಗ್ರಾಪಂ ಸದಸ್ಯ ತಿಮ್ಮಣ್ಣ, ಭಾನುವಳ್ಳಿ ಚೌಡಪ್ಪ ಸಿ., ಆನಂದ ಬೆಳ್ಳೂಡಿ, ಪ್ರವೀಣ್, ಲಿಂಗರಾಜ್, ಗುಳ್ಳಪ್ಪ, ನಿಂಗರಾಜ್, ಮಂಜುನಾಥ್, ಹನುಮಂತ, ಹರೀಶ್, ಯಲ್ಲಪ್ಪ ಕೆ.ಎಚ್., ಹನುಮಂತಪ್ಪ ಎಚ್., ಪಕ್ಕೀರಪ್ಪ, ಈರಣ್ಣ ಬಿ.ಎ., ಹನುಮಜ್ಜ, ಹನುಮಕ್ಕ, ನಾಗಮ್ಮ, ಪುಷ್ಪ, ಭಾಗ್ಯಮ್ಮ, ಸುಶೀಲಮ್ಮ, ಹಾಲಮ್ಮ, ನಿರ್ಮಲಮ್ಮ, ಗುಳ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.