ಹರಪನಹಳ್ಳಿ, ಜು.26- ಹರಪನಹಳ್ಳಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ ಜಿಲ್ಲಾ ಸಹಕಾರ ಬ್ಯಾಂಕಿನ ಪ್ರತಿನಿಧಿಯಾಗಿ ಕುಲುಮಿ ಅಬ್ದುಲ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಹಕಾರ ಬ್ಯಾಂಕಿಗೆ ಆಯ್ಕೆಯಾದ ಕುಲುಮಿ ಅಬ್ದುಲ್ರವರನ್ನು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಬಿ.ಕೆ.ಪ್ರಕಾಶ್, ಹರಪನಹಳ್ಳಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ನೇತ್ರಾವತಿ, ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಟಿ.ಎಚ್.ಎಂ. ಮಂಜುನಾಥ್, ನಿರ್ದೇಶಕ ಎಂ.ವಿ.ಅಂಜಿನಪ್ಪ, ಪುರಸಭೆ ಸದಸ್ಯರಾದ ಡಿ.ಅಬ್ದುಲ್ ರಹಿಮಾನ್, ಗೊಂಗಡಿ ನಾಗರಾಜ್, ಟಿ.ವೆಂಕಟೇಶ್, ಲಾಟಿ ದಾದಾಪೀರ್, ಮುಖಂಡರಾದ ಎಚ್.ವಸಂತಪ್ಪ, ನಿಟ್ಟೂರು ಸಣ್ಣಹಾಲಪ್ಪ, ಚಿಕ್ಕೇರಿ ಬಸಪ್ಪ, ಅಗ್ರಹಾರ ಅಶೋಕ್, ಎಲ್.ಎಂ.ನಾಯ್ಕ, ಬಾಣದ ಅಂಜಿನಪ್ಪ, .ನಿಲುವಂಜಿ ಅಶೋಕ್, ಪರಶುರಾಮ, ವಹಾಬ್ ಸಾಹೇಬ್, ಎನ್.ಶಂಕರ್, ಗುಡಿ ನಾಗರಾಜ್, ತಿಮ್ಮಲಾಪುರದ ಈಶ್ವರ್, ಬಿ.ದುರುಗಪ್ಪ, ಎಚ್.ಶಿವರಾಜ್, ತಿರುಪತ್ತೆಪ್ಪ, ಪ್ರಕಾಶನಾಯ್ಕ, ಟಿ.ಎ.ಪಿ.ಸಿ.ಎಂ ಎಸ್ ಕಾರ್ಯದರ್ಶಿ ಹೆಚ್.ತಿರುಪತಿ, ಸೇರಿದಂತೆ ಇತರರು ಅಭಿನಂದಿಸಿದರು.