ಜಿ.ಪಂ. ಸಿಇಓ ಬಿ. ಸದಾಶಿವಪ್ರಭು ಅರಸೀಕೆರೆ ಗ್ರಾ.ಪಂ.ಗೆ ಭೇಟಿ

ಜಿ.ಪಂ. ಸಿಇಓ ಬಿ. ಸದಾಶಿವಪ್ರಭು ಅರಸೀಕೆರೆ ಗ್ರಾ.ಪಂ.ಗೆ ಭೇಟಿ

ಹರಪನಹಳ್ಳಿ, ಜು. 26 – ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿಗೆ  ಜಿಲ್ಲಾ ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಬಿ. ಸದಾಶಿವಪ್ರಭು ದಿಢೀರ್ ಭೇಟಿ ನೀಡಿ ಕಲ್ಯಾಣ ಕರ್ನಾಟಕ, ಮಾನವ  ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಅನುಷ್ಠಾನಗೊಳಿಸುವ ಕೌಶಲ್ಯ ಕೇಂದ್ರವನ್ನು ಹಾಗೂ ಸೌಲಭ್ಯ ಪಡೆದಿರುವ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು ಹಾಗೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಲು ಸೂಚಿಸಿದರು.

ಕಸ ವಿಲೇವಾರಿ ಘಟಕದ ಮಾಹಿತಿ ಪಡೆದು ಸ್ವಚ್ಛ ಗ್ರಾಮ ವನ್ನಾಗಿಸಲು ಹಾಗೂ ಕುಡಿಯುವ ನೀರಿನ ಬಗ್ಗೆ ಯಾವುದೇ ತೊಂದರೆ ಬಾರದಂತೆ ಮತ್ತು ಜನರಿಗೆ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕವನ್ನು ಸರಿಯಾಗಿಟ್ಟು ಕೊಳ್ಳಲು ಸೂಚಿಸಿದರು. ಮತ್ತಿಹಳ್ಳಿ, ಸಾಸ್ವೆಹಳ್ಳಿ, ಕಡಬಗೆರೆ, ಅರಸೀಕೆರೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೈ. ರೇಖಾ ಕೊಟ್ರೇಶ್, ಪಿ.ಡಿ. ಓ.ಟಿ.  ಅಂಜಿನಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಹಾಜರಿದ್ದರು.

error: Content is protected !!