ನಗರದ ಭದ್ರಾ ಪಿಯು ಕಾಲೇಜಿನಲ್ಲಿ ಇಂದು ಸಾಂಸ್ಕೃತಿಕ ವೇದಿಕೆ

ಭದ್ರಾ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10.30 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಪ್ರೊ. ಆರ್‌. ಶಶಿಧರ್‌, ಪ್ರೊ. ಸಿ.ಹೆಚ್‌. ಮುರಿಗೇಂದ್ರಪ್ಪ ಆಗಮಿಸುವರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಚಂದ್ರಪ್ಪ ಡಿ ವಹಿಸುವರು. ಕಾರ್ಯಕ್ರಮದಲ್ಲಿ ಪ್ರೊ. ಟಿ. ಮುರುಗೇಶ್‌, ಎಂ. ಸಂಕೇತ್‌ ಉಪಸ್ಥಿತರಿರುವರು.

error: Content is protected !!