ರಾಣೇಬೆನ್ನೂರಿನಲ್ಲಿಂದು ಉಪಸಭಾಪತಿಗೆ ಸನ್ಮಾನ

ಬಿಎಜೆಎಸ್‌ಎಸ್ ಸಂಸ್ಥೆಯ ಛೇರ್ಮನ್‌, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮತ್ತು ಶಾಸಕ ಪ್ರಕಾಶ ಕೋಳಿವಾಡ ಅವರನ್ನು ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯಲ್ಲಿ ಗಾಯತ್ರಿ ಕ್ಯಾಂಪಸ್‌ನ ಸಮೂಹ ಸಂಸ್ಥೆಯಲ್ಲಿ ಸನ್ಮಾನಿಸಲಾಗುತ್ತಿದೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಆರ್.ಎಂ. ಕುಬೇರಪ್ಪ ವಹಿಸುವರು. ಶಿಕ್ಷಣ ಇಲಾಖೆ ಉಪನಿರ್ದೇಶಕ  ಡಾ. ಎಚ್.ಉಮೇಶಪ್ಪ, ಕಾಲೇಜು ಆಡಳಿತಾಧಿಕಾರಿ ಎಸ್.ಎ. ತಾಂಬೆ ಪಾಲ್ಗೊಳ್ಳುವರು.

error: Content is protected !!