ರಾಣೇಬೆನ್ನೂರಿನ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ

ರಾಣೇಬೆನ್ನೂರಿನ ಶ್ರೀ ಮಾರ್ಕಂಡೇಶ್ವರ  ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ

ರಾಣೇಬೆನ್ನೂರು, ಜು.19- ಇಲ್ಲಿನ ಶ್ರೀ ಸಿದ್ದೇಶ್ವರ ನಗರದಲ್ಲಿರುವ ಪದ್ಮಶಾಲಿ ಸಮಾಜದ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ಸರ್ವಧರ್ಮ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.

 ಶ್ರೀ ಮಾರ್ಕಂಡೇಶ್ವರ ಸ್ವಾಮಿ ಅಭಿಷೇಕ, ಬಿಲ್ವಾರ್ಚನೆ, ಶ್ರೀ ಹನುಮಂತ ದೇವರಿಗೆ ಅಭಿಷೇಕ, ಪೂಜೆ, ಶ್ರೀ ನವಗ್ರಹಗಳಿಗೆ ಅಭಿಷೇಕ, ಪೂಜೆ ಹಾಗೂ ನಾಗದೇವತೆ, ಬನ್ನಿಮಹಾಂಕಾ ಳಮ್ಮ ಪೂಜೆ ನೆರವೇರಿಸಿದ ನಂತರ ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರೀ ಸುಮಿತ್ರಾ ಪುಂಡಲೀಕಪ್ಪ ದಾಸರ  ದೇವಗೊಂ ಡನಕಟ್ಟಿ ಕುಟುಂಬದವರು ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಸಮಾಜದ   ಹನುಮಂತಪ್ಪ ಮುಕ್ತೇನಹಳ್ಳಿ,  ಮಾರುತಿ ಗರಡಿಮನಿ,  ನೀಲಪ್ಪ ಕುಮಾರಪ್ಪನವರ, ಪರಶುರಾಮ ಅಗಡಿ,  ರಾಮಣ್ಣ ವೈದ್ಯ, ಚನ್ನವೀರಯ್ಯ ಸ್ವಾಮಿ, ಶ್ರೀಮತಿ ಮಂಜುಳ ಕುಮಾರಪ್ಪನವರ, ನೇತ್ರ ವರದಾ, ಚುಂಚಾನವರ, ಪ್ರೇಮಾ ಶೆಟ್ಟಿ, ನಾಗೇಶ ದೇವರೆಡ್ಡಿ, ಪ್ರವೀಣ ಗುತ್ತೂರು, ಗುರುನಾಥ ದಾಸರ, ವಿಠ್ಠಲ ದಾಸರ, ಶಕುಂತಲಮ್ಮ, ರಾಮಪ್ಪ, ರಾಧಮ್ಮ,  ಚನ್ನಬಸಮ್ಮ ಕಾಮಣ್ಣನವರ, ನೇತ್ರಾ ಹರಿಹರ ಮತ್ತಿತರರು ಭಾಗವಹಿಸಿದ್ದರು. 

error: Content is protected !!