ಕಾರ್ಮಿಕರು ಸರಿಯಾಗಿ ಕೆಲಸ ಮಾಡಿದರೆ  ದಾವಣಗೆರೆ ಸುಂದರವಾಗಿರುತ್ತದೆ: ಎಸ್ಸೆಸ್

ಕಾರ್ಮಿಕರು ಸರಿಯಾಗಿ ಕೆಲಸ ಮಾಡಿದರೆ  ದಾವಣಗೆರೆ ಸುಂದರವಾಗಿರುತ್ತದೆ: ಎಸ್ಸೆಸ್

ದಾವಣಗೆರೆ, ಜು.17- ಪೌರ ಕಾರ್ಮಿಕರು ಸರಿಯಾಗಿ ತಮ್ಮ ತಮ್ಮ ಕೆಲಸ ಮಾಡಿದರೆ ನಗರ ಸುಂದರವಾಗಿರುತ್ತದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ನಗರ ಪಾಲಿಕೆಯಿಂದ ಸೂಪರ್ ಮಾರ್ಕೆಟ್ ಬಳಿ  `ಪೌರ ಕಾರ್ಮಿಕರುಗಳಿಗೆ ಅತ್ಯಾಧುನಿಕ ವಿಶ್ರಾಂತಿ ಗೃಹ’ ನಿರ್ಮಿ ಸುವ  ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆಯು ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ  ಅತ್ಯಾಧುನಿಕ ವಿಶ್ರಾಂತಿ ಗೃಹವನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಪ್ರತಿ ನಿತ್ಯ ಗಂಟೆಗಟ್ಟಲೇ ಕೆಲಸ ಮಾಡಿ ಸುಸ್ತಾಗಿ ಬರುವ ಕಾರ್ಮಿಕರಿಗೆ ವಿಶ್ರಾಂತಿಸಲು ಅನುಕೂಲವಾಗುತ್ತದೆ ಎಂದರು.

ಪಾಲಿಕೆಯ ಆಯುಕ್ತರಾದ ರೇಣುಕಾ, ಮೇಯರ್ ವಿನಾಯಕ್ ಪೈಲ್ವಾನ್, ಕಾರ್ಯಪಾಲಕ ಅಭಿಯಂತರರಾದ ಎಂ.ಎನ್. ಹರ್ಷಿತಾ, ಸಹಾಯಕ ಕಾರ್ಯ ಪಾಲಕ ಅಭಿಯಂತರ ವಿನಾಯಕ್ ಎಂ. ನಾಯಕ್, ಕಿರಿಯ ಅಭಿಯಂತರ ಮಾರುತಿ, ರತ್ನು ಕನ್‍ಸ್ಟ್ರಕ್ಷನ್ ಗುತ್ತಿಗೆದಾರರಾದ ತಿಲಕ್ ರತ್ನು, ಉಮೇಶ್, ಶೀತಲ್ ನಾಯ್ಕ್,  ಕಾರ್ತಿಕ್ ಆಲೂರು, ಸ್ವರೂಪ್ ಮತ್ತಿ, ಅಭಿಲಾಷ್  ಹಾಗೂ  ಇತರರು ಹಾಜರಿದ್ದರು.

error: Content is protected !!