ಕೃಷಿ ಪತ್ತಿನ ಸಂಘದ ನಿರ್ದೇಶಕರಾಗಿ ಪಿ.ಟಿ. ಪರಮೇಶ್ವರ ನಾಯ್ಕ

ಕೃಷಿ ಪತ್ತಿನ ಸಂಘದ ನಿರ್ದೇಶಕರಾಗಿ ಪಿ.ಟಿ. ಪರಮೇಶ್ವರ ನಾಯ್ಕ

ಹರಪನಹಳ್ಳಿ, ಜು.14- ತಾಲ್ಲೂಕಿನ ಹಿರೇಮಲ್ಲನಕೆರೆ ಕೃಷಿ ಪತ್ತಿನ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ  ಆಯ್ಕೆಯಾಗುವ ಮೂಲಕ ಸಹಕಾರಿ ಕ್ಷೇತ್ರ ಪ್ರವೇಶಿಸಿದ್ದಾರೆ. 

ಸಹಕಾರಿ ನಿರ್ದೇಶಕರಾಗಿದ್ದ ಹಂಪಸಾಗರ ಬಸಪ್ಪ ಮತ್ತು ವೀರಾಪುರ ಬಸವರಾಜ ಅವರ ರಾಜೀನಾಮೆಯಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ಪರಮೇಶ್ವರ ನಾಯ್ಕ ಮತ್ತು ತಳವಾರ ಶಿವಮ್ಮ ಅವರುಗಳನ್ನು ಬುಧವಾರ ನಡೆದ ಆಡಳಿತ ಮಂಡಳಿ ವಿಶೇಷ ಸಭೆಯಲ್ಲಿ ಕೋ-ಅಪ್ ಮಾಡಿಕೊಳ್ಳಲಾಯಿತು ಎಂದು  ತಿಳಿಸಲಾಗಿದೆ.

error: Content is protected !!