ಇಂದು ಸಂತ ಶ್ರೇಷ್ಠ ಶ್ರೀ ನಾಮದೇವ ಮಹಾರಾಜರ ಪಲ್ಲಕ್ಕಿ ಉತ್ಸವ

ಇಂದು ಸಂತ ಶ್ರೇಷ್ಠ ಶ್ರೀ ನಾಮದೇವ ಮಹಾರಾಜರ ಪಲ್ಲಕ್ಕಿ ಉತ್ಸವ

ದಾವಣಗೆರೆಯ ಶ್ರೀ ವಿಠ್ಠಲ ಮಂದಿರ (ಎಸ್‌.ಕೆ.ಪಿ. ರಸ್ತೆ) ಹಾಗೂ ಶ್ರೀ ನಾಮದೇವ ಭಜನಾ ಮಂದಿರ (ದೊಡ್ಡಪೇಟೆ) ಇವರ ಜಂಟಿ ಆಶ್ರಯದಲ್ಲಿ ಸಂತ ಶ್ರೇಷ್ಠ ಶಿರೋಮಣಿ ಶ್ರೀ ನಾಮದೇವ ಮಹಾರಾಜರ ಸಂಜೀವಿನಿ ಸೋಹಳಾ (ಪುಣ್ಯಾರಾಧನೆ) ಪ್ರಯುಕ್ತ ಇಂದು ಬೆಳಿಗ್ಗೆ 5 ಗಂಟೆಗೆ ಸಂತ ಮಂಡಳಿಯವರಿಂದ ಭಜನೆ, ಕಾಕಡಾರತಿ, ಬೆಳಿಗ್ಗೆ 7 ಗಂಟೆಗೆ ಹರಿಪಾಠ ಹ.ಭ.ಪ. ಮಂಜುನಾಥ ಪಿಸೆ ಸಂಗಡಿಗರಿಂದ, ಬೆಳಿಗ್ಗೆ 8.30 ಕ್ಕೆ ಸಂತರಿಂದ ಪ್ರವಚನ ನಡೆಯುವುದು. ಬೆಳಿಗ್ಗೆ 10 ರಿಂದ ಪ್ರಮುಖ ಬೀದಿಗಳಲ್ಲಿ ಸಂತ ಶ್ರೇಷ್ಠ ಶ್ರೀ ನಾಮದೇವ ಮಹಾರಾಜರ ಪಲ್ಲಕ್ಕಿ ಉತ್ಸವ ಹಾಗೂ ಗುಲಾಲ್‌ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ 1.30 ಕ್ಕೆ ಮಹಾಮಂಗಳಾರತಿ ನಂತರ ದೊಡ್ಡಪೇಟೆಯ ನಾಮದೇವ ಭಜನಾ ಮಂದಿರದಲ್ಲಿ ಪ್ರಸಾದ ವಿನಿಯೋಗ ನಡೆಯಲಿದೆ.

error: Content is protected !!