ಗೊಲ್ಲರಹಳ್ಳಿಯ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ವೀರಶೈವ ಸಮಾಜದ ಸಭೆ ಕರೆಯಲಾಗಿದೆ ಎಂದು ಸಮಾಜದ ಅಧ್ಯಕ್ಷ ಹುಣಸಘಟ್ಟ ಗದುಗೇಶ ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಾಧು ವೀರಶೈವ ಸಮಾಜದಿಂದ ಆಯ್ಕೆಯಾಗಿರುವ ಸಚಿವರಿಗೆ ಅಭಿನಂದನಾ ಸಮಾರಂಭದ ವಿಷಯವಾಗಿ ಪೂರ್ವಬಾವಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸಮಾಜದ ಬಂಧುಗಳು ಸಭೆಗೆ ಆಗಮಿಸಿ ಸಲಹೆ-ಸಹಕಾರ ನೀಡಬೇಕೆಂದು ಮನವಿ ಮಾಡಿದರು.