ದಾವಣಗೆರೆ, ಜು.13- ಈಚೆಗೆ ಉಗಾಂಡದಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ನಗರದ ಇಂದೂಧರ್ (ಬೆನ್ನು ಹುರಿ ಅಪಘಾತ ವಿಕಲಚೇತನ) ಅವರು ಕಂಚಿನ ಪದಕ ಪಡೆದಿದ್ದಾರೆ.
ಇಂದೂಧರ್ ಇವರನ್ನು ಕರ್ನಾಟಕ ರಾಜ್ಯ ವಿಕಲಚೇತನ ಆರ್.ಪಿ.ಡಿ. ಟಾಸ್ಕ್ ಫೋರ್ಸ್ ರಾಜ್ಯ ಉಪಾಧ್ಯಕ್ಷರಾದ ಎಂ. ವಿಜಯಲಕ್ಷ್ಮಿ, ಜಿಲ್ಲಾ ಘಟಕದ ಅಧ್ಯಕ್ಷ ಅಶ್ರಫ್ ಅಲಿ, ಮುಕುಂದ, ರಾಘವೆಂದ್ರ, ತಬುಸುಂ, ನಾಗಮ್ಮ, ಶಂಕ್ರಮ್ಮ, ಗಣೇಶ್ ಅಭಿನಂದಿಸಿದ್ದಾರೆ.