ಹರಿಹರ, ಜು. 13 – ಲಡಾಖ್ನ ಮಹಾಬೋಧಿ ಇಂಟರ್ ನ್ಯಾಷನಲ್ ಮೆಡಿಟೇಷನ್ ಸೆಂಟರ್ ನೀಡುವ ‘ವಿಶ್ವಶಾಂತಿಗಾಗಿ ಹಿಮಾಲಯನ್ ಯೋಗ ಪ್ರಶಸ್ತಿ 2023’ ಅನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರಿಗೆ ಪ್ರದಾನ ಮಾಡಲಾಗಿದೆ.
ಇಂತಹ ಗೌರವಗಳು ನಮಗೆ ಇನ್ನಷ್ಟು ಚೈತನ್ಯವನ್ನು ನೀಡುತ್ತವೆ ಎಂದಿರುವ ವಚನಾನಂದ ಶ್ರೀಗಳು, ಯೋಗಯುಕ್ತ –
ರೋಗಮುಕ್ತ ಸಮಾಜದ ನಿರ್ಮಾಣಕ್ಕೆ ಸತತ ಪರಿಶ್ರಮಿಸೋಣ ಎಂದು ಕರೆ ನೀಡಿದ್ದಾರೆ.