ವಿಶ್ವ ಜನಸಂಖ್ಯಾ ದಿನ : ಮೆಹೆಂದಳೆ ಕೊಲ್ಯಾಜ್ ಚಿತ್ರ ಬಿಡುಗಡೆ

ವಿಶ್ವ ಜನಸಂಖ್ಯಾ ದಿನ : ಮೆಹೆಂದಳೆ ಕೊಲ್ಯಾಜ್ ಚಿತ್ರ ಬಿಡುಗಡೆ

ಹರಿಹರ, ಜು. 12 – ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಗುರುದ್ರೋಣಾಚಾರ್ಯ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ ನಿವೃತ್ತ ಚಿತ್ರಕಲಾ ಶಿಕ್ಷಕ ಡಾ. ಜಿ.ಜೆ.ಮೆಹೆಂದಳೆ ಕೊಲ್ಯಾಜ್ ಚಿತ್ರ ರಚಿಸಿದರು. ಕೋಲ್ಯಾಜ್ ಚಿತ್ರವನ್ನು ಅಮೃತ ವರ್ಷಿಣಿ ವಿದ್ಯಾಲಯದ ಚೇರಮನ್ ಪಿ.ಕೆ.ಪ್ರಕಾಶರಾವ್ ಅವರು ವಿದ್ಯಾಲಯದ ಆವರಣದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅಮೃತ ವರ್ಷಿಣಿ ವಿದ್ಯಾಲಯದ ಪ್ರಾಂಶುಪಾಲರಾದ ಚೇತನಾ ರಾವ್, ಕಾರ್ಯದರ್ಶಿ ವಿನಯ ರಾವ್, ಶಿಕ್ಷಕಿ ವೇದಾವತಿ ಸಿ.ಹೆಚ್., ಅಕ್ಷತಾ ಬಿ.ಎಂ. ಮತ್ತಿತರರು ಉಪಸ್ಥಿತರಿದ್ದರು.

error: Content is protected !!