ಹರಿಹರ, ಜು. 12- ನಗರಸಭೆಯ ಅಧ್ಯಕ್ಷರಾದ ನಿಂಬಕ್ಕ ಚಂದಪೂರ್ ಅವರು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರನ್ನು ಭೇಟಿ ಮಾಡಿ, ನಗರಸಭೆಯ ನಗರೋತ್ಥಾನ ಮತ್ತು ನಗರಸಭೆಯ ವಿಶೇಷ ಅನುದಾನ ಸೇರಿ 24 ಕೋಟಿ ರೂಪಾಯಿ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ನಗರಸಭೆ ಸದಸ್ಯ ಪಿ.ಎನ್ ವೀರುಪಾಕ್ಷಪ್ಪ, ಪೌರಾಯುಕ್ತ ಐಗೂರು ಬಸವರಾಜ್, ಜೆಎಡಿಸ್ ಮುಖಂಡ ಸುರೇಶ್ ಚಂದಪೂರ್ ಇತರರು ಹಾಜರಿದ್ದರು.