ಹರಪನಹಳ್ಳಿ, ಜು. 11 – ಪಟ್ಟಣದ ಎಸ್.ಯು.ಜೆ.ಎಂ. ಕಾಲೇಜಿನ ಪ್ರಾಚಾರ್ಯರಾಗಿ ಕನ್ನಡ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ ಜವಾಬ್ದಾರಿ ಸ್ವೀಕರಿಸಿದರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕೂಬಿಹಾಳ ಗ್ರಾಮದಲ್ಲಿರುವ ಎಸ್.ಯು.ಎಸ್.ಜೆ. ಕಾಲೇಜಿನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಹರಪನಹಳ್ಳಿ ಎಸ್.ಯು.ಜೆ.ಎಂ. ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ಬಿ. ಸೋಮರೆಡ್ಡಿ, ಎಸ್ ಚನ್ನಬಸಪ್ಪ, ಎಮ್. ಚಿಕ್ಕಪ್ರಸಾದ, ಎಸ್. ಕೊಟ್ರೇಶ್, ಆತ್ಮಾನಂದ, ಸಿ. ಪ್ರವೀಣ, ಟಿ.ಎಂ. ಜಯದೀಪ ಮುಂತಾದವರು ಉಪಸ್ಥಿತರಿದ್ದರು. ಪ್ರಭಾರಿ ಪ್ರಾಚಾರ್ಯರಾಗಿದ್ದ ಬಿ. ಕೃಷ್ಣಮೂರ್ತಿ ಅವರು ಅಧಿಕಾರ ಹಸ್ತಾಂತರಿಸಿದರು.