ಗಿರಿಜಾರ ಪುಸ್ತಕ ಪ್ರಬಂಧ ಸ್ಪರ್ಧೆ

ದಾವಣಗೆರೆ, ಜು. 10 – ಹಿರಿಯ ಲೇಖಕಿ ಟಿ. ಗಿರಿಜಾ ಅವರ ನೆನಪಿನಲ್ಲಿ ‘ಜಿಲ್ಲೆ ಸಮಾಚಾರ’ ಪತ್ರಿಕಾ ಬಳಗವು ಪ್ರಬಂಧ ಸ್ಪರ್ಧೆ ಯೊಂದನ್ನು ಆಯೋಜಿಸಿದೆ. ಪ್ರಬಂಧವು `ಟಿ. ಗಿರಿಜಾರ ಯಾವುದೇ ಪುಸ್ತಕ’ ಕುರಿತ ನಿಮ್ಮ ಅನಿಸಿಕೆಯನ್ನು 3 ಪುಟಕ್ಕೆ ಮಿತಿಗೊಳಪಡಿಸಿ ಬರೆಯಬೇಕು. ಕೈಬರವಣಿಗೆಗೆ ಆದ್ಯತೆ. ಡಿಟಿಪಿ ಮಾಡಿ ಕಳುಹಿಸಿ ಕೊಡಬಹುದಾಗಿದೆ.  ಪ್ರಬಂಧವನ್ನು ಇದೇ ದಿನಾಂಕ 12ರೊಳಗೆ ತಲುಪುವಂತೆ ಕಳುಹಿಸಬೇಕು. ವ್ಯವಸ್ಥಾಪಕರು, ಜಿಲ್ಲೆ ಸಮಾಚಾರ ದಿನ ಪತ್ರಿಕಾ ಬಳಗ, ನಂ : 12, ನಾಯಕ ಹಾಸ್ಟೆಲ್ ಕಾಂಪ್ಲೆಕ್ಸ್, ಪಿ.ಜೆ. ಬಡಾವಣೆ, ದಾವಣಗೆರೆ. ಮೊ: 97401 12249, 96065 68950.

error: Content is protected !!