ಸಚಿವ ಎಸ್ಸೆಸ್ಸೆಂಗೆ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಸನ್ಮಾನ

ಸಚಿವ ಎಸ್ಸೆಸ್ಸೆಂಗೆ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಸನ್ಮಾನ

ದಾವಣಗೆರೆ, ಜು.10-  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಅವರ ನಿವಾಸದಲ್ಲಿ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ ಅವರ ನೇತೃತ್ವದಲ್ಲಿ  ಇಂದು ಸನ್ಮಾನಿಸಲಾಯಿತು.  

ಬಸವರಾಜಪ್ಪ ಅವರು ಎಸ್ಸೆಸ್ಸೆಂ ಅವರನ್ನು ಅಭಿನಂದಿಸಿ ಮಾತನಾಡುತ್ತಾ, ಮಲ್ಲಿಕಾರ್ಜುನ್  ಮಧ್ಯ ಕರ್ನಾಟಕದ ಯುವ ನಾಯಕರಾಗಿದ್ದು, ನಾಡಿನ ಅಭಿವೃದ್ಧಿಯ ಬಗ್ಗೆ ಸದಾ ದೂರದೃಷ್ಟಿಯುಳ್ಳವರಾಗಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆ ಮತ್ತು ನಾಡು ಅಭಿವೃದ್ಧಿ ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಎಮ್.ಬಿ. ಸಂಗಮೇಶ್ವರ ಗೌಡ, ಬಿ. ವಾಮದೇವಪ್ಪ, ವೈ. ವಸಂತಪ್ಪ, ಕೆ.ಸಿ. ಲಿಂಗರಾಜ್ ಆನೆಕೊಂಡ, ಎಸ್.ಆರ್. ಸಿರಗಂಬಿ, ಡಾ ಎಚ್.ಎಸ್. ಮಂಜುನಾಥ್ ಕುರ್ಕಿ  ಜಿ.ಡಿ. ಗುರುಸ್ವಾಮಿ , ಜೆ.ಆರ್.ಷಣ್ಮುಖಪ್ಪ ಮತ್ತಿತರರು  ಉಪಸ್ಥಿತರಿದ್ದು ನೂತನ ಸಚಿವರಿಗೆ ಶುಭ ಕೋರಿದರು.

error: Content is protected !!