ದಾವಣಗೆರೆ, ಜು. 9 – ಜನರ ನಿರೀಕ್ಷೆ ಮೀರಿ ಆರ್ಥಿಕ ಶಿಸ್ತನ್ನು ಕಾಪಾಡಿ ಎಲ್ಲರೂ ಅಚ್ಚರಿ ಪಡುವಂತೆ ಕೇವಲ ಮೂರು ಇಲಾಖೆಯಿಂದ 5 ಭಾಗ್ಯಗಳಿಗೂ ಹಣವನ್ನು ಒದಗಿಸಿ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹೊರಿಸದೆ, ಇರುವ ವಿಪುಲ ಅವಕಾಶಗಳನ್ನು ಸಮರ್ಥವಾಗಿ ಬಳಸಿ ಅತ್ಯುತ್ತಮವಾಗಿ ಮುಂಗಡ ಪತ್ರವನ್ನು ಮಂಡಿಸಿದ್ದಾರೆ. ಜನಪ್ರಿಯ ಯೋಜನೆಗೆ ಹೆಚ್ಚು ಒತ್ತು ಕೊಟ್ಟರೂ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದಾರೆ. ಹಾಗಾಗಿ ಲೆಕ್ಕ ರಾಮಯ್ಯನ ಲೇಖ ಪರ್ಫೆಕ್ಟ್..
– ಡಾ. ಸುಜಿತ್ ಕುಮಾರ್ ಎಸ್. ಹೆಚ್., ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು, ಬಿಐಇಟಿ, ಸೆಬಿ ಸಂಪನ್ಮೂಲ ವ್ಯಕ್ತಿ