ದಾವಣಗೆರೆ, ಜು. 9 – ಅಮರನಾಥ ಯಾತ್ರೆಗೆ ಹೋಗಿದ್ದ ನಗರದ ನಾಲ್ಕು ಜನರು ಸುರಕ್ಷಿತವಾಗಿ ವಾಪಾಸ್ ಬಂದಿದ್ದಾರೆ.
ಎನ್.ಆರ್. ಗೀತಾ, ಬಿ.ಜಿ. ಪುಷ್ಪಾ, ಎನ್.ವಿ. ಉಷಾರಾಣಿ, ಸಿ.ಹೆಚ್. ಚಂದ್ರಿಕ ಅವರುಗಳು ಅಮರನಾಥ ಯಾತ್ರೆ ಕೈಗೊಂಡಿದ್ದು, ಕಳೆದ ವಾರ ಅಮರನಾಥ ದರ್ಶನ ಪಡೆದ ಅವರು ಮಳೆ ಪ್ರಾರಂಭವಾದ್ದರಿಂದ ಎರಡು ದಿನ ಶ್ರೀನಗರದಲ್ಲಿ ತಂಗಿದ್ದು, ನಾಳೆ ದಾವಣಗೆರೆಗೆ ಆಗಮಿಸುತ್ತಿದ್ದಾರೆ.