ಅರಣ್ಯದಲ್ಲಿ ಕುರಿ ಮೇಯಿಸಲು ಅನುಮತಿಗಾಗಿ ಮನವಿ

ಅರಣ್ಯದಲ್ಲಿ ಕುರಿ ಮೇಯಿಸಲು ಅನುಮತಿಗಾಗಿ ಮನವಿ

ದಾವಣಗೆರೆ, ಜು.9 –  ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಅಲೆಮಾರಿ ಕುರಿಗಾಯರುಗಳಿಗೆ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅನುಮತಿ ನೀಡಬೇಕೆಂದು ದಾವಣಗೆರೆಯಲ್ಲಿ ರಾಜ್ಯ ಅಲೆಮಾರಿ ಕುರುಬರ ಕುರಿಗಾಹಿಗಳ ಸಂಘದ ರಾಜ್ಯಾಧ್ಯಕ್ಷ ಎಸ್.ಎಸ್. ಗಿರೀಶ್ ನೇತೃತ್ವದಲ್ಲಿ  ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಕಳೆದ ವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು. 

ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ಹೊಲ, ಗದ್ದೆಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ ಹೀಗಾಗಿ ಮೇವು ಸಿಗದೆ ಕಾರಣ ಕುರಿಗಳನ್ನು ಮೇಯಿಸಲು ತೊಂದರೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿ ಸಲು ಹೋದರೆ ಅರಣ್ಯ ಸಿಬ್ಬಂದಿ ಕುರಿ ಗಾಹಿಗಳ ಮೇಲೆ ಹಲ್ಲೆಯಂತಹ ಪ್ರಕರಣ ಬೆಳಕಿಗೆ ಬಂದಿವೆ. 

ಹೀಗಾಗಿ ಮಳೆಗಾಲ ಮುಗಿಯುವವರೆಗೂ ಅಲೆಮಾರಿ ಕುರಿಗಾಯಿಗಳು ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಿಸಲು ಮತ್ತು ಕುರಿಗಾಹಿಗಳು ಗುಡಾರ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾ ಯಿತು. ಇದರಿಂದ  ಕುರಿ ಹಿಕ್ಕಿ ಅರಣ್ಯ ಪ್ರದೇಶದಲ್ಲಿ ಬೀಳುವುದರಿಂದ ಅರಣ್ಯ ಪ್ರದೇಶವು ಕೂಡ ಫಲವತ್ತಾಗುತ್ತದೆ ಮತ್ತು ಯಾವುದೇ ಮರ ಅಥವಾ ಗಿಡಗಳಿಗೆ ಹಾನಿಯಾಗದಂತೆ ಕುರಿ ಮೇಯಿಸುತ್ತೇವೆ ಹೀಗಾಗಿ ಅನುಮತಿ ನೀಡುವಂತೆ ರಾಜ್ಯ ಅಲೆಮಾರಿ ಕುರುಬರ ಕುರಿಗಾಹಿಗಳ ಸಂಘದಿಂದ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು
ತಿಳಿಸಿದ್ದಾರೆ. 

ಈ‌  ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ, ಖಜಾಂಚಿ ದೀಪಕ್ ಜೋಗಪ್ಪನವರ್, ಕಾರ್ಯದರ್ಶಿ ಶ್ರೀನಿವಾಸ್ ಮೌರ್ಯ, ಪ್ರಸನ್ನ ಬೆಳಕೆರೆ, ನಲ್ಕುಂದ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!