ಸ್ವಂತ ಹಣದಲ್ಲಿ ಬೋರ್ ಕೊರೆಸಿದ ಗ್ರಾ.ಪಂ. ಸದಸ್ಯ ಬಸವರಾಜ್

ಸ್ವಂತ ಹಣದಲ್ಲಿ ಬೋರ್ ಕೊರೆಸಿದ  ಗ್ರಾ.ಪಂ. ಸದಸ್ಯ ಬಸವರಾಜ್

ಮಲೇಬೆನ್ನೂರು, ಜು. 5- ಕೊಮಾರನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಗಾ.ಪಂ. ಸದಸ್ಯ ಮಡಿವಾಳರ ಬಸವರಾಜ್ ಅವರು, ತಮ್ಮ ಸ್ವಂತ ಹಣದಲ್ಲಿ ಬೋರ್‌ ಕೊರೆಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬುಧವಾರ ಬೆಳಿಗ್ಗೆ ಬೋರ್ ಕೊರೆಸುವ ಮುನ್ನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಬಿ.ಪಿ. ಹರೀಶ್ ಕೂಡ ಬಸವರಾಜ್ ಅವರ ಜನಪರ ಕಾಳಜಿಯನ್ನು ಶ್ಲಾಘಿಸಿದರು. ಗ್ರಾಮದ ಕೆ. ಉಜ್ಜೇಶ್, ಐರಣಿ ಅಣ್ಣಪ್ಪ, ರಾಮಣ್ಣಸ್ವಾಮಿ, ದಾನಪ್ಳ ಅರುಣ್, ಮಲೇಬೆನ್ನೂರಿನ ಪಿ.ಆರ್. ರಾಜು, ವೈ. ಚಂದ್ರಶೇಖರ್, ಬೆಣ್ಣೆಹಳ್ಳಿ ಬಸವರಾಜ್, ಕುಂಬಳೂರು ಅಶೋಕ್, ಜಿಗಳಿ ಹನುಮಗೌಡ ಮತ್ತಿತರರು ಈ ವೇಳೆ ಹಾಜರಿದ್ದರು. 

error: Content is protected !!