ದಾವಣಗೆರೆ,ಜು.5- ನಗರದ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಹುಣ್ಣಿಮೆ ಕಾರ್ಯಕ್ರಮದಡಿಯಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಆಚರಿಸಲಾಯಿತು.
ಶ್ರೀ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಕೆ. ಸುಶೀಲಮ್ಮ ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿದ್ದ ಈ ಕಾರ್ಯಕ್ರಮದಲ್ಲಿ ಶರಣ ಅಡಪದ ಅಪ್ಪಣ್ಣ ಮತ್ತು ಸಂತ ಶಿಶು ನಾಳ ಶರೀಫರ ಜಯಂತ್ಯೋತ್ಸವದ ಕುರಿತಂತೆ ಶ್ರೀಮತಿ ಜ್ಯೋತ್ನ್ಸಾ ಶ್ರೀಕಂಠನ್ ಮತ್ತು ಶ್ರೀಮತಿ ಉಮಾ ಯಮ್ಮಿ, ಅಧಿಕ ಶ್ರಾವಣ ಮಾಸದ ಬಗ್ಗೆ ಶ್ರೀಮತಿ ಶೋಭಾ ಕಣವಿ ಉಪನ್ಯಾಸ ನೀಡಿದರು.
ಶ್ರೀಮತಿ ವಿಜಯ ಹಿರೇಮಠ ಮತ್ತು ತಂಡದವರು ವಚನ ಗಾಯನ ಮತ್ತು ಶ್ರೀಮತಿ ಜಯಮ್ಮ ನೀಲಗುಂದ ಅವರು ಚಿಂತನ – ಮಂತನ ನಡೆಸಿಕೊಟ್ಟರು.
ಶ್ರೀಮತ್ತಿ ಮಜುಳಾ ಕಾಯಿ ಅವರಿಂದ ಸ್ವಾಗತ, ಶ್ರೀಮತಿ ವಿಜಯ ಬಸವರಾಜ್ ಅವರಿಂದ ವಂದನಾರ್ಪಣೆ, ಶ್ರೀಮತಿ ಪುಷಾ ರಾರವಿ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.