ಹರಪನಹಳ್ಳಿ : ನಾಗರತ್ನ ಹೊಸಮನಿಗೆ ಬೀಳ್ಕೊಡುಗೆ

ಹರಪನಹಳ್ಳಿ : ನಾಗರತ್ನ ಹೊಸಮನಿಗೆ ಬೀಳ್ಕೊಡುಗೆ

ಹರಪನಹಳ್ಳಿ, ಜು. 3 –  ಗ್ರಂಥಪಾಲಕರಾಗಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಮಾಡಿ ನಿವೃತ್ತಿಯಾಗಿರುವ ನಾಗರತ್ನ ಹೊಸಮನಿಯವರ ಸೇವೆ ಅಮೋಘವಾದುದು ಎಂದು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್. ಷಣ್ಮುಖನಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ  ಮಾತನಾಡಿದ  ಅವರು, ಹೊಸದುರ್ಗ, ಮಾಯಕೊಂಡ ಹಾಗೂ ಹರಪನಹಳ್ಳಿಗಳಲ್ಲಿ 6 ವರ್ಷಗಳ ಕಾಲ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗಿದ್ದು, ಅವರ ಮುಂದಿನ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು. ದೈಹಿಕ-ಶಿಕ್ಷಣ ನಿರ್ದೆಶಕ  ಎಚ್. ಕೊಟ್ರೇಶ  ಪ್ರಭಾರಿ ಗ್ರಂಥಪಾಲಕರಾಗಿ ಅಧಿಕಾರ ವಹಿಸಿ ಕೊಂಡರು. 

ಉಪನ್ಯಾಸಕರಾದ ಎನ್.ಎಂ. ನಾಗರಾಜ, ಡಾ. ತಿಪ್ಪೇಸ್ವಾಮಿ, ಡಾ.ಕೆ. ಸತೀಶ, ವ್ಯವಸ್ಥಾಪಕರಾದ ಸುನೀತ, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!