ವಿಶೇಷ ರೀತಿಯಲ್ಲಿ ಕನ್ನಡ ಪರ ಹೋರಾಟಗಾರನ ಹುಟ್ಟುಹಬ್ಬ

ವಿಶೇಷ ರೀತಿಯಲ್ಲಿ ಕನ್ನಡ ಪರ  ಹೋರಾಟಗಾರನ ಹುಟ್ಟುಹಬ್ಬ

ದಾವಣಗೆರೆ, ಜು.3- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡ ಪರ ಹೋರಾಟಗಾರ  ಟಿ. ಶಿವಕುಮಾರ್‌ ಅವರ  67ನೇ ಹುಟ್ಟುಹಬ್ಬದ   ಪ್ರಯುಕ್ತ ಅವರ ಸುಪುತ್ರ ಶಿವರತನ್ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಉತ್ತರ ಭಾರತದಿಂದ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದಿರುವ ಹಿಂದಿ ಭಾಷೆ ಮಾತನಾಡುವ ವೈದ್ಯಕೀಯ ವಿದ್ಯಾರ್ಥಿ ಗಳಿಗೆ ಕನ್ನಡ ಕಲಿಕೆಯ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು, ಕನ್ನಡ ಕಲಿತು ಸಂಭಾಷಣೆ ಮಾಡಿ ಎಂದು ಮನವಿ ಮಾಡಿ, ಜಾಗೃತಿ ಮೂಡಿಸಿದರು.  

ಈ ಸಂದರ್ಭದಲ್ಲಿ ಒಕ್ಕೂಟದ ಮುಖ್ಯಸ್ಥ  ಎಸ್.ಜಿ. ಸೋಮಶೇಖರ್, ಶಾಮ್‌ಸುಂದರ್, ದಾ.ಹ. ಶಿವಕುಮಾರ್  ಮತ್ತಿತರರಿದ್ದರು.

error: Content is protected !!