ದಾವಣಗೆರೆ, ಜೂ. 30 – ಬಜೆಟ್ನಲ್ಲಿ ಲೇಖಕಿಯರ ಸಂಘಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಲೇಖಕಿಯರ ಸಂಘ ಒತ್ತಾಯಿಸಿದೆ. ಈ ಸಂಬಂಧ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಇಂದು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಎಚ್.ಎಲ್. ಪುಷ್ಪ, ಮಾಜಿ ಸಚಿವರಾದ ಶ್ರೀಮತಿ ಲಲಿತಾ ನಾಯಕ್, ಹಿರಿಯ ಲೇಖಕರಾದ ಶ್ರೀಮತಿ ಕಮಲಾ ಹಂಪನಾ, ಶ್ರೀಮತಿ ವಸುಂಧರಾ ಭೂಪತಿ, ಶ್ರೀಮತಿ ಆಶಾದೇವಿ, ಶ್ರೀಮತಿ ಇಂದಿರಾ ಕೃಷ್ಣಪ್ಪ ಮತ್ತಿತರರು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಅನುದಾನ ನೀಡಲು ಮುಖ್ಯಮಂತ್ರಿಗೆ ಕರ್ನಾಟಕ ಲೇಖಕಿಯರ ಸಂಘದ ಮನವಿ
![13 anudaana 01.07.2023 ಅನುದಾನ ನೀಡಲು ಮುಖ್ಯಮಂತ್ರಿಗೆ ಕರ್ನಾಟಕ ಲೇಖಕಿಯರ ಸಂಘದ ಮನವಿ](https://janathavani.com/wp-content/uploads/2023/07/13-anudaana-01.07.2023-860x500.jpg)