ಮುರುಘಾಮಠದಲ್ಲಿ ನಾಳೆ ಭಕ್ತರ ಸಭೆ

ಚಿತ್ರದುರ್ಗ, ಜೂ. 23- ಇಲ್ಲಿನ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಉಚ್ಛನ್ಯಾಯಾಲಯ ಆದೇಶಿಸಿದ್ದು, ನ್ಯಾಯಾ ಲಯದ ಆದೇಶದಂತೆ ಇದೇ ದಿನಾಂಕ 25 ರಂದು ಭಾನುವಾರ ಬೆಳಿಗ್ಗೆ 11.30 ಕ್ಕೆ  ಶ್ರೀ ಮುರುಘಾ ಮಠದ ರಾಜಾಂಗಣದಲ್ಲಿ ನಾಡಿನ ಭಕ್ತರ ಮಹಾಸಭೆ ಕರೆಯಲಾಗಿದೆ ಎಂದು ಭಕ್ತರ ಪರವಾಗಿ ಪಿ.ಎಸ್. ಪ್ರಕಾಶ ಮತ್ತು ಹಿರಿಯ ಪತ್ರ ಕರ್ತ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದ್ದಾರೆ.

ಶ್ರೀ ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠಕ್ಕೆ ಸೂಕ್ತ ಆಡಳಿತ ವ್ಯವಸ್ಥೆಗಾಗಿ ನೀಡಿರುವ ನ್ಯಾಯಾಲಯದ ಆದೇಶದಂತೆ ಶ್ರೀಮಠದ ನಾಡಿನ ಭಕ್ತರ ಮಹಾಸಭೆ ಕರೆಯಲಾಗಿದೆ.

ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಭಕ್ತಾದಿಗಳು, ಮಠಾಧೀಶರ ಒಡನಾ ಡಿಗಳು, ಬಸವಕೇಂದ್ರದ ಮುಖಂಡರು, ಕಾರ್ಯಕರ್ತರು ಹಾಗೂ ಶ್ರೀ ಮುರುಘಾ ಪರಂಪರೆಯ ಆಂಧ್ರ, ತಮಿಳು ನಾಡು, ಮಹಾ ರಾಷ್ಟ್ರ ಕೇರಳದ ಸ್ವಾಮೀಜಿ ಗಳು, ಮುಖಂ ಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!