ತುಂಗಭದ್ರಾ ಸೊಸೈಟಿ ಅಧ್ಯಕ್ಷರಾಗಿ ಶಿವಾನಂದಪ್ಪ ಆಯ್ಕೆ

ತುಂಗಭದ್ರಾ ಸೊಸೈಟಿ ಅಧ್ಯಕ್ಷರಾಗಿ ಶಿವಾನಂದಪ್ಪ ಆಯ್ಕೆ

ಹರಿಹರ, ಜು. 22- ನಗರದ ತುಂಗಭದ್ರಾ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಂ.ಶಿವಾನಂದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೆಚ್. ಸುನೀತಾ ಘೋಷಣೆ ಮಾಡಿದರು.

ನಗರದ ತುಂಗಭದ್ರಾ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಡಿ. ಹೇಮಂತರಾಜ್, ಜಿ.ಎಸ್. ಚನ್ನಬಸಪ್ಪ, ಸೈಯದ್ ಇಫ್ತಿಕಾರ್ ಆಹ್ಮದ್, ಬಿ. ಮಂಜಪ್ಪ, ಎಂ. ಹನುಮಂತಪ್ಪ, ಪಿ. ತಿಮ್ಮಣ್ಣ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಎಲ್.ಪಿ.ಮಮತಾ, ಎ.ಬಿ. ಗಂಗಮ್ಮ ಹಾಗೂ ವ್ಯವಸ್ಥಾಪಕ ಶರತ್ ಹಾಗೂ ಇತರರು ಹಾಜರಿದ್ದರು.

error: Content is protected !!