ವಿಕೋಪ ನಿರ್ವಹಣೆಯ ಸಂಪುಟ ಉಪ ಸಮಿತಿಗೆ ಎಸ್ಸೆಸ್ಸೆಂ

ವಿಕೋಪ ನಿರ್ವಹಣೆಯ  ಸಂಪುಟ ಉಪ ಸಮಿತಿಗೆ ಎಸ್ಸೆಸ್ಸೆಂ

ಬೆಂಗಳೂರು, ಜೂ. 22 – ರಾಜ್ಯದಲ್ಲಿನ ಬರ, ಪ್ರವಾಹ ವಿಪತ್ತು ನೈಸರ್ಗಿಕ ವಿಕೋಪ ನಿರ್ವಹಣೆಗೆ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ 6 ಸಚಿವರ ಸಂಪುಟ ಉಪಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. 

ಈ ಸಮಿತಿಯಲ್ಲಿ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಎನ್.ಚಲುವರಾಯಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕೆ.ಎನ್.ರಾಜಣ್ಣ ಸದಸ್ಯರಾಗಿದ್ದಾರೆ. ವಿಪತ್ತು ಪರಿಸ್ಥಿತಿ ಪರಾಮರ್ಶಿಸಿ ಅಗತ್ಯ ಸೂಚನೆ ನೀಡಲು ಹಾಗೂ ನೀತಿ ನಿರೂಪಣೆ ಮಾಡಲು ಸಚಿವ ಸಂಪುಟ ಉಪ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ.

error: Content is protected !!