ನಗರದಲ್ಲಿಂದು ಚಾರ್ಟರ್ಡ್ ಅಕೌಂಟೆಂಟ್ ಭವನ ಉದ್ಘಾಟನೆ

ದಾವಣಗೆರೆ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್  ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ `ಚಾರ್ಟರ್ಡ್ ಅಕೌಂಟೆಂಟ್ಸ್ ಭವನ’ದ ಉದ್ಘಾಟನಾ ಸಮಾರಂಭ ನಡೆಯಲಿದೆ. 

ಐಡಿಬಿಐ ಬ್ಯಾಂಕ್ ಚೇರ್ಮನ್ ಪದ್ಮಶ್ರೀ ಟಿ.ಎನ್. ಮನೋಹರನ್,  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಎಸ್‌ಐಆರ್‌ಸಿ ಚೇರ್ಮನ್ ಎಸ್. ಪನ್ನರಾಜ್, ಕೇಂದ್ರ ಮಂಡಳಿ ಸದಸ್ಯ ಕೋಥ ಶ್ರೀನಿವಾಸ್, ಕೆಎಸ್‌ಸಿಎಎ ಅಧ್ಯಕ್ಷ ಪ್ರಮೋದ್ ಶ್ರೀಹರಿ, ಡಿಸಿಎಎ ಗೌರವಾಧ್ಯಕ್ಷ ಅಥಣಿ ವೀರಣ್ಣ, ಅಧ್ಯಕ್ಷ ಕಿರಣ್ ಎಲ್. ಪಾಟೀಲ್, ಕಾರ್ಯದರ್ಶಿ ಉಮೇಶ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಎ. ಕಿರಣ್ ಕುಮಾರ್, ಕನ್ವೀನರ್ ಎನ್.ಜಿ. ಗಿರೀಶ್ ನಾಡಿಗ್ ಭಾಗವಹಿಸಲಿದ್ದಾರೆ. 

error: Content is protected !!