ದಾವಣಗೆರೆ, ಜೂ. 18- ಜಿಲ್ಲಾ ಮಹಿಳಾ ಗಾಣಿಗರ ಸಮಾಜದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ಬಿಜಾಪುರದ ಶ್ರೀಮತಿ ಮೀನಾಕ್ಷಿ ಹುಟ್ಟಿಗಿ ಮತ್ತು ಹಿರಿಯೂರಿನ ಶ್ರೀಮತಿ ಶಶಿಕಲಾ ರವಿಶಂಕರ್ ಉಪಸ್ಥಿತರಿದ್ದರು. ಶ್ರೀಮತಿ ಪ್ರಭಾ ಜಯದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಗುರುಗಳಾದ ಬಸವ ಕುಮಾರಸ್ವಾಮಿಗಳು, ಸಮಾಜದ ಗೌರವ ಅಧ್ಯಕ್ಷ ಡಾ.ಜಿ.ಸಿ. ಬಸವರಾಜ್, ನಿಕಟ ಪೂರ್ವ ಅಧ್ಯಕ್ಷ ಡಿ.ಎಸ್. ಬಸವರಾಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಮೀನಾಕ್ಷಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಗಾಣಿಗ ಸಮಾಜದ ಮಹಿಳಾ ಘಟಕದಿಂದ ಪುರಸ್ಕಾರ
![05 ganiga samaja 19.06.2023 ಗಾಣಿಗ ಸಮಾಜದ ಮಹಿಳಾ ಘಟಕದಿಂದ ಪುರಸ್ಕಾರ](https://janathavani.com/wp-content/uploads/2023/06/05-ganiga-samaja-19.06.2023-860x573.jpg)