ದಾವಣಗೆರೆ, ಜೂ. 18 – ವರುಣ ದೇವನ ಕೃಪೆಗಾಗಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ನಾಡಿದ್ದು ದಿನಾಂಕ 20ರ ಮಂಗಳವಾರ ಎಡೆಜಾತ್ರೆ ಅರ್ಪಿಸಲಾಗುವುದು ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.
ಮಳೆ ಬಾರದೇ ರೈತರು ಬಿತ್ತನೆಗೆ ಪರಿತಪಿಸುತ್ತಿದ್ದು, ವ್ಯಾಪಾರಸ್ಥರು, ಸಾರ್ವಜ ನಿಕರು ಬಿಸಿಲಿನ ಬೇಗೆ ತಡೆಯಲಾರದೇ ಕಂಗಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವರುಣ ದೇವನ ಕೃಪೆಗಾಗಿ ಎಡೆ ಜಾತ್ರೆ ನಡೆಸಲಾಗುತ್ತದೆ. ದೇವಸ್ಥಾನದ ಪುರೋಹಿತ ನಾಗರಾಜ್ ಜೋಯಿಸ್ ಮತ್ತು ಸಂಗಡಿಗರು ಎಡೆ ಜಾತ್ರೆಯನ್ನು ನಡೆಸಿಕೊಡುವರು.
ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಟ್ರಸ್ಟ್ನ ಸದಸ್ಯರ ಅಪೇಕ್ಷೆಯ ಮೇರೆಗೆ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಶ್ರೀ ಅಮ್ಮನವರ ಎಡೆ ಜಾತ್ರೆಗೆ ಏರ್ಪಾಡು ಮಾಡಲಾಗಿದೆ.