ಕುಂಬಳೂರು ಶಾಲೆಯಲ್ಲಿ ನೋಟ್ ಬುಕ್ ವಿತರಣೆ

ಕುಂಬಳೂರು ಶಾಲೆಯಲ್ಲಿ ನೋಟ್ ಬುಕ್ ವಿತರಣೆ

ಮಲೇಬೆನ್ನೂರು, ಜೂ.16- ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಲ್ಲಿ ಬೆಂಗಳೂರಿನ ಇಂಡಿಯಾ ಸುಧಾರ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಶುಕ್ರವಾರ ವಿತರಿಸಲಾಯಿತು.

ಇಂಡಿಯಾ ಸುಧಾರ ಸಂಸ್ಥೆಯ ನಿರ್ದೇಶಕ ಕಿರಣ್ ಮಾತನಾಡಿ, ಮಕ್ಕಳು ಹಾಳೆಯನ್ನು ಹರಿಯದೇ ಉಪಯುಕ್ತ ಬರವಣಿಗೆ ಮಾಡಿ ಪ್ರತಿಭಾವಂತ ಮಕ್ಕಳಾಗಿ ಹೊರ ಬಂದು ಪೋಷಕರಿಗೆ ಶಿಕ್ಷಕರಿಗೆ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಹೆಚ್.ಶರಣ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯರಾದ ಹೆಚ್.ಎಂ.ಸದಾ ನಂದ, ಕೆ.ಕಾಮರಾಜ್, ಮುಖ್ಯ ಶಿಕ್ಷಕಿ ಲೀಲಾವತಿ, ದೈಹಿಕ ಶಿಕ್ಷಕಿ ಪರಿಮಳ ಹಾಗೂ ಬೇರೆ ಶಾಲೆಗಳ ಮುಖ್ಯ ಶಿಕ್ಷಕ ರಾದ ನಂದಿತಾವರೆಯ ಉಮೇಶ್, ಹರಿಹರದ ರೇವಣ ನಾಯಕ್ ಮತ್ತು ಇತರರು ಹಾಜರಿದ್ದರು. ಶಿಕ್ಷಕಿ ನೇತ್ರಾವತಿ ನಿರೂಪಿಸಿದರೆ, ನಾಗಮಂಜುಳ ಜೋಶಿ ವಂದಿಸಿದರು.

error: Content is protected !!