ಕುಂಬಳೂರಿನಲ್ಲಿ ನಡೆದ ಸಂಭ್ರಮದ ಗಂಗವ್ವನ ಹಬ್ಬ

ಕುಂಬಳೂರಿನಲ್ಲಿ ನಡೆದ ಸಂಭ್ರಮದ ಗಂಗವ್ವನ ಹಬ್ಬ

ಮಲೇಬೆನ್ನೂರು, ಜೂ. 13 – ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ, ಕುಂಬಳೂರಿನಲ್ಲಿ ಗಂಗಾಮತ ಸಮಾಜದವರು ಮಂಗಳವಾರ ಗಂಗವ್ವನ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಬೆಳಿಗ್ಗೆ ಗ್ರಾಮದ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಅಭಿಷೇಕ ಮಾಡಲಾಯಿತು. 

ನಂತರ ಮಹಿಳೆಯರು ದೇವಿಗೆ ಉಡಿತುಂಬಿದರು. ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಎಲ್ಲಾ ಶಾಲಾ ಮಕ್ಕಳು ಪ್ರಸಾದ ಸವಿದರು.

ಈ ವೇಳೆ ನೂತನ ಶಾಸಕ ಬಿ.ಪಿ ಹರೀಶ್‌ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಗಂಗಾಮತ ಸಮಾಜದ ಮುಖಂಡರಾದ ಮಾಗಾನಹಳ್ಳಿ ಹಾಲಪ್ಪ ಆರ್‌.ಹೆಚ್‌. ಬಸವರಾಜ್‌ ಕರಡೆಪ್ಪರ ರಾಜಪ್ಪ, ಬಲ್ಲೂರು ನಾಗರಾಜ್‌, ಬಲ್ಲೂರ್‌ ತಿಪ್ಪಣ್ಣ, ಕರಡಇ ಸೋಮಶೇಖರ್‌, ಎಂ. ಪರಮೇಶ್ವರಪ್ಪ, ಡಿ.ಎಂ. ಕುಬೇರಪ್ಪ, ಕಡೇಮುನಿ ಬಸವರಾಜ್‌, ಎಸ್‌.ಹೆಚ್‌. ಜಯ್ಯಪ್ಪ, ಬೆಳ್ಳೂಡಿ ಸಿದ್ದಪ್ಪ, ವೈ.ಶ್ರೀನಿವಾಸ್‌, ಕಡೇಮನಿ ಪುಟ್ಟಪ್ಪ, ಬಸವರಾಜಪ್ಪ ಎಂ. ವಾಸುದೇವಮೂರ್ತಿ, ಮೆಡಿಕಲ್‌ ಷಾಪ್‌ ರಾಜೀವ್‌, ಎಂ. ಹೆಚ್‌. ಶರಣ್‌ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!