ದಾವಣಗೆರೆ, ಜೂ. 13- ಖಾಸಗಿ ಇಂಜಿನಿಯ ರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರಮಟ್ಟದ ಕಾಮೆಡ್-ಕೆ ಪರೀಕ್ಷೆಯಲ್ಲಿ ನಗರದ ಸರ್ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ಕೆ.ಎನ್. ಆಕಾಶ್ 54ನೇ ರ್ಯಾಂಕ್ ಪಡೆದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದಾಗಿ ಕಾಲೇಜು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹ್ಮದ್ ದನಿಶ್ 243ನೇ ರಾಂಕ್, ಆರ್. ಆಕಾಶ್ 397ನೇ ರಾಂಕ್ ಪಡೆದಿದ್ದಾರೆ. ಕಾಲೇಜಿನಿಂದ ಪರೀಕ್ಷೆ ಬರೆದು ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಅಧ್ಯಕ್ಷ ಡಾ. ರಾಜೇಂದ್ರ ನಾಯ್ಡು, ನಿರ್ದೇಶಕ ಸೈಯದ್ ಷಂಷೀರ್, ಸುರೇಶ್, ಜಗನ್ನಾಥ್, ಪ್ರದೀಪ್, ಪದ್ಮನಾಭ್ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.