ಜಿ.ಎಂ. ಸೌಹಾರ್ದ ಸಂಘ : 500 ಕೋಟಿ ರೂ. ಠೇವಣಿ ಗುರಿ

ಜಿ.ಎಂ. ಸೌಹಾರ್ದ ಸಂಘ : 500 ಕೋಟಿ ರೂ. ಠೇವಣಿ ಗುರಿ

ದಾವಣಗೆರೆ, ಜೂ. 12- ನಗರದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ನಡೆದ ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್ ಅವರು ಸದಸ್ಯರಿಗೆ ಮುಂಬರುವ 5 ವರ್ಷಗಳಲ್ಲಿ 500 ಕೋಟಿ ಠೇವಣಿ ಸಂಗ್ರಹಣೆಯ ಗುರಿ ಹೊಂದುವ ಸಂಕಲ್ಪ ಹೊಂದಿದೆ ಎಂದರು.

2022-23ನೇ ಸಾಲಿನ ಅಂತ್ಯಕ್ಕೆ ನಮ್ಮ ಸಹಕಾರಿಯು ಈಗಾಗಲೇ 202.74 ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದ್ದು, 173.32 ಕೋಟಿ ರೂ.ಗಳ ಸಾಲ ವಿತರಿಸಿದ್ದೇವೆ. 3.6 ಕೋಟಿ ರೂ.ಗಳ ಲಾಭ ಗಳಿಸಿದೆ ಎಂದು ತಿಳಿಸಲು ಹರ್ಷ ವ್ಯಕ್ತಪಡಿಸಿದರು.

ಎಲ್ಲಾ ಸದಸ್ಯರ ಸಹಕಾರದಿಂದ ಈ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದರು. ಸಹಕಾರ ಸಂಘದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಪೂರ್ವಕ ನಡೆ ಮುಖ್ಯ ಕಾರಣ ಎಂದು ಸ್ಮರಿಸಿದರು.

ಕೋವಿಡ್ ಸಂದರ್ಭದಲ್ಲಿ ಶೇ.12 ಡಿವಿಡೆಂಟ್ ವಿತರಣೆ ಮಾಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸದಸ್ಯರ ಹಿತರಕ್ಷಣೆ ಹಾಗೂ ಆದ್ಯತೆಯ ಮೇರೆಗೆ ಡಿವಿಡೆಂಡ ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಹಕಾರಿಯ ಕೇಂದ್ರಕ್ಕೆ ಪಿ.ಬಿ.ರಸ್ತೆಯಲ್ಲಿ ಒಂದು ಯೋಗ್ಯ ನಿವೇಶನ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವ ಸುಳಿವು ನೀಡಿದರು. 

ಸಂಘದ ಉಪಾಧ್ಯಕ್ಷರಾದ ಪ್ರಭುದೇವ್ ಮಾತನಾಡಿ, ಸಂಘದ ಮುಂದಿನ ನಡೆಯ ಬಗ್ಗೆ ಸ್ಥೂಲ ಪರಿಚಯ ಒದಗಿಸಿದರು. ವೇದಿಕೆಯಲ್ಲಿ ಹಿರಿಯ ನಿರ್ದೇಶಕರಾದ ಜಿ.ಆರ್.ನೀಲಕಂಠಪ್ಪ, ಎ.ಎಸ್.ಗುರುಮೂರ್ತಿ, ಟಿ.ಅರುಣಕುಮಾರ್, ಕೆ.ಎಸ್.ವಿಜಯಕುಮಾರ್, ಎ.ಸಿ.ಬಸವರಾಜ್, ಶರತ್ ಪಾಟೀಲ್, ಬಿ.ಎಸ್.ರವೀಂದ್ರ, ಎ.ಬಿ.ಸಿದ್ದನಗೌಡ, ಮಹಿಳಾ ನಿದೇರ್ಶಕರಾದ ವೈ.ಎಸ್.ಗಾಯತ್ರಿ ಸುಭಾಷ್‍ಚಂದ್ರ, ಪ್ರಮೀಳ ನಟರಾಜ್, ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಮಲ್ಲಪ್ಪ, ಸಹಕಾರಿಯ ವಿಶೇಷ ಸಲಹೆಗಾರರಾದ ಎಸ್.ಸಿ.ಮಹಾರುದ್ರಪ್ಪ, ಸೇರಿದಂತೆ ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!