ಹರಿಹರ,ಜು, 12- ಬಾಲಕಾರ್ಮಿಕ ಪದ್ದತಿ ಕೊನೆ ಗಾಣಿಸಬೇಕೆಂಬ ಬೇಡಿಕೆಯನ್ನು ಬೆಂಬಲಿಸಲು ಮತ್ತು ತೀವ್ರಗೊಳಿಸಲು `ಬಾಲ ಕಾರ್ಮಿಕ ವಿರೋಧಿ ದಿನ’ವನ್ನು ಆಚರಿಸಲಾಗುತ್ತಿದೆ ಎಂದು ಯಶಸ್ವಿ ಕಿರಣ ಸೇವಾ ಸಂಸ್ಥೆ ಅಧ್ಯಕ್ಷ ಶಶಿನಾಯ್ಕ್ ತಿಳಿಸಿದರು. ಇಲ್ಲಿನ ಬೆಂಕಿನಗರದ ಯಶಸ್ವಿ ಕಿರಣ ಸೇವಾ ಸಂಸ್ಥೆ ಆವರಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, 1987ರಿಂದ ರಾಷ್ಟ್ರೀಯ ಬಾಲಕಾರ್ಮಿಕ ನೀತಿಯನ್ನು ಜಾರಿಗೆ ತಂದಿದೆ, 14 ವರ್ಷದ ಒಳಗಿನ ಮಕ್ಕಳು ಯಾರೂ ಕೆಲಸಕ್ಕೆ ಹೋಗದೆ ಶಾಲೆಗೆ ಹೋಗಬೇಕು. ಎಲ್ಲಾ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೇಮಾನಂದ, ಹನುಮಂತಪ್ಪ, ಮುಬಾರಕ್, ನಾಗರಾಜ, ಭಾಷಾ ಸಾಬ್ ಮತ್ತಿತರು ಉಪಸ್ಥಿತರಿದ್ದರು.