ದಾವಣಗೆರೆ, ಜೂ. 12- ನಗರದ ಬಿಐಇಟಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಿಂದ ರಾಜ್ಯಮಟ್ಟದ ತಂತ್ರಜ್ಞಾನ ಪ್ರಬಂಧಸ್ಪರ್ಧೆ ಪ್ಯಾಪಿರಸ್ 2023ನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.
ಇ.ಸಿ. ಫೋರಂ, ಐ.ಎಸ್.ಟಿ.ಇ. ಮತ್ತು ಐ.ಇ.ಟಿ.ಇ ವಿದ್ಯಾರ್ಥಿ ಘಟಕಗಳ ಸಹಭಾಗಿತ್ವದೊಂದಿಗೆ ಆಯೋಜಿಸಿದ್್ದ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ 25 ತಂಡಗಳು ಭಾಗವಹಿಸಿದವು.
ಕಾಗ್ನಿಷನ್ ಪ್ರಾಜೆಕ್ಟ್ ಪ್ರದರ್ಶನದಲ್ಲಿ 13 ತಂಡಗಳು ಭಾಗವಹಿಸಿದವು. ಮೈಸೂರಿನ ದೀನಬಂಧು ಟ್ರಸ್ಟ್ ನ ಅಡ್ಮಿನಿಸ್ಟ್ರೇಟರ್ ಶ್ರೀಮತಿ ಪ್ರಜ್ಞಾ ನೀಲಗುಂದ ಶಾಂತಿನಾಥ್ ಅತಿಥಿಗಳಾಗಿ ಭಗವಹಿಸಿದ್ದರು. ಬಿಐಇಟಿ ಮತ್ತು ಜಿಎಂಐಟಿ ಕಾಲೇಜಿನ ಪ್ರಾಧ್ಯಾಪಕರು ತೀರ್ಪುಗಾರರಾಗಿದ್ದರು.