ಹರಿಹರ, ಜು. 6 – ನಗರದ ಅಮರಾವತಿ ಕಾಲೋನಿ ಹತ್ತಿರ ಸಿಲಿಂಡರ್ ತುಂಬಿದ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅಮರಾವತಿ ಕಾಲೋನಿ ನಿವಾಸಿ ಬೈಕ್ ಸವಾರ ಬೂದಾಳ ಮಲ್ಲೇಶಪ್ಪ (77) ಬೈಕ್ ನಲ್ಲಿ ಹೋಗುವಾಗ ಹರಿಹರ ಕಡೆಯಿಂದ ಸಿಲಿಂಡರ್ ತುಂಬಿದ ಲಾರಿ ಡಿಕ್ಕೆ ಹೊಡೆದಿದೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ಬೂದಾಳ ಮಲ್ಲೇಶಪ್ಪನವರು ನಗರದ ರೈಲ್ವೆ ಇಲಾಖೆಯ ನಿವೃತ್ತ ನೌಕರರು ಎನ್ನಲಾಗಿದೆ. ಸ್ಥಳಕ್ಕೆ ಗುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.