ನೀರು ಸರಬರಾಜು ಕೇಂದ್ರಕ್ಕೆ ಡಿಸಿ ಭೇಟಿ

ನೀರು ಸರಬರಾಜು ಕೇಂದ್ರಕ್ಕೆ ಡಿಸಿ ಭೇಟಿ

ಹೊನ್ನಾಳಿ, ಮೇ 26- ಪಟ್ಟಣದ ನೀರು ಸರಬರಾಜು ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ, ಕುಡಿಯುವ ನೀರಿನ ಎರಡನೇ  ಹಂತದ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತುರ್ತಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಎಸಿ ಹುಲ್ಮನಿ ತಿಮ್ಮಪ್ಪ, ತಹಶೀಲ್ದಾರ್‌ ಗಣಪತಿ ಭಟ್, ಇಓ ರಾಮ್‍ಭೋವಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ನಿರಂಜನಿ, ಪುರಸಭೆ ಸಿಬ್ಬಂದಿಗಳು, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!