ದಾವಣಗೆರೆ, ಮೇ 26- ಮದುವೆ ಮಂಟಪದಲ್ಲಿ ಸಂಬಂಧಿಗಳು ನೀಡಿದ್ದ ಉಡುಗೊರೆ ಹಣವನ್ನೇ ಕಳ್ಳರು ದೋಚಿರುವ ಘಟನೆ ಇಲ್ಲಿನ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ವಾಸರಟ್ಟಿಹಳ್ಳಿಯ ವೀರಪ್ಪ ಎಂಬುವವರು ತನ್ನ ಮಗನ ವಿವಾಹವನ್ನು ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದರು. ವಿವಾಹಕ್ಕೆ ಬಂದ ಸಂಬಂಧಿಕರು ವಿವಾಹಕ್ಕೆ ಉಡುಗೊರೆಯಾಗಿ ನೀಡಿದ 1 ಲಕ್ಷ ರೂ. ಮೌಲ್ಯದ ಹಣದ ಕವರ್ಗಳು ಕಾಣೆಯಾಗಿದ್ದು, ಈ ಬಗ್ಗೆ ದಾವಣಗೆರೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.