ಲಿಂ|| ಓಂಕಾರಪ್ಪ ದಂಪತಿ ಸ್ಮರಣಾರ್ಥ ಅನ್ನ ಸಂತರ್ಪಣೆ, ಸೇವಾ ಕಾರ್ಯ

ದಾವಣಗೆರೆ, ಮೇ 15- ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಲಿಂ.ಮಾಗಾನಹಳ್ಳಿ ಓಂಕಾರಪ್ಪ ಮತ್ತು ನಿವೃತ್ತ  ಡಯಟ್ ಉಪನ್ಯಾಸಕಿ  ಲಿಂ. ಎಂ.ಜಿ. ನೀಲಮ್ಮ ಇವರ ದ್ವಿತಿಯ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ವಚನ ಗಾಯನ, ಸಂಗೀತ ಗೋಷ್ಠಿ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ  ಪುಣ್ಯಸ್ಮರಣೆ ಮತ್ತು ಪ್ರಸಾದ ಸೇವೆ ಮಾಡಲಾಯಿತು. 

ಅಲ್ಲದೇ ಎಸ್ಪಿ ಆಫೀಸ್ ಬಳಿಯ ರಿಂಗ್ ರಸ್ತೆಯಲ್ಲಿರುವ ನವಜ್ಯೋತಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳ ಹಾಗು ಮಹಿಳೆಯರ ಪುನರ್ವಸತಿ ಕೇಂದ್ರದಲ್ಲಿ  ಶಾಲಾ ಸಾಮಗ್ರಿ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು  ವಿತರಿಸಲಾಯಿತು.   

ಓಂಕಾರಪ್ಪನವರ ಪುತ್ರ ಇಂಜಿನಿಯರ್ ಎಂ.ಓ.ನಿರಂಜನ್ ಈ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. 

error: Content is protected !!