ರಾಣೇಬೆನ್ನೂರಿನಲ್ಲಿ `ನನ್ನ ಜಯ ಖಚಿತ’

ರಾಣೇಬೆನ್ನೂರಿನಲ್ಲಿ `ನನ್ನ ಜಯ ಖಚಿತ' - Janathavaniರಾಣೇಬೆನ್ನೂರು, ಮೇ 11- ನನಗೆ ಎಲ್ಲ ಸಮಾಜದವರು ಮತ ನೀಡಿದ್ದು, ನಾನು ಜಯಗಳಿಸುವುದು ಖಚಿತವೆಂದು ಎನ್‌ಸಿಪಿ ಅಭ್ಯರ್ಥಿ ಆರ್.ಶಂಕರ್ ಇಂದು ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ರಿಂಗ್ ರಸ್ತೆ ನಿರ್ಮಾಣದ ಜೊತೆಗೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಿ ಎಲ್ಲರಲ್ಲಿ ಭಾವೈಕ್ಯತೆ ಮೂಡಿಸಿ ಮಾದರಿ ತಾಲ್ಲೂಕು ಮಾಡುವ ಪ್ರಯತ್ನ ಮಾಡುತ್ತೇನೆ. ಸರ್ಕಾರ ರಚನೆಯಲ್ಲಿ ನನ್ನ ಅವಶ್ಯಕತೆ ಬಂದಲ್ಲಿ ನಾನೊಬ್ಬನೆ ತೀರ್ಮಾನ ಕೈಗೊಳ್ಳದೆ ತಾಲ್ಲೂಕಿನ ಜನರ ಹಾಗೂ ನಮ್ಮ ಮುಖಂಡರ ಎದುರು ಚರ್ಚೆ ನಡೆಸಿ ಯೋಗ್ಯ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಂಕರ್ ಹೇಳಿದರು. ರಾಜು ಅಡಿವೆಪ್ಪನವರ, ಶಿವಾನಂದ ಕನ್ನಪ್ಪಳವರ, ನಿಂಗಪ್ಪ ಕೋಡಿಹಳ್ಳಿ, ಶಿವಪ್ಪ ಮಣೇಗಾರ ಮತ್ತಿತರರಿದ್ದರು.

error: Content is protected !!