ದಾವಣಗೆರೆ, ಮೇ 10 – ನಗರದ ಜಯನಗರ `ಎ’ ಬ್ಲಾಕ್ನಲ್ಲಿರುವ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಅಮಿತ್ ಎಸ್.ಎ. ಈ ವಿದ್ಯಾರ್ಥಿ 514 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. 6 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಆರ್. ಮೀನಾಕ್ಷಿ, ಸಂಸ್ಥಾಪಕ ರುದ್ರಮುನಿ, ಕಾರ್ಯದರ್ಶಿ ಮಂಜುನಾಥ ಆರ್. ಹೆಗಡೆ, ಆಡಳಿತಾಧಿಕಾರಿ ಕೆ.ಬಿ.ಆನಂದ್, ಮುಖ್ಯೋಪಾಧ್ಯಾಯ ಬಿ.ಸಿ. ರೇಣುಕಾರಾಧ್ಯ ಅಭಿನಂದಿಸಿರುತ್ತಾರೆ.