ಮತದಾನ ಮಾಡಿದವರಿಗೆ ಒಂದು ದಿನ ಹೆಚ್ಚುವರಿ ವೇತನ

ದಾವಣಗೆರೆ, ಮೇ 9-  ನಗರದ ಸರ್.ಎಂ.ವಿ. ಕಾಲೇಜಿನ ಸಿಬ್ಬಂದಿಗಳಿಗೆ ಒಂದು ದಿನದ ವೇತನವನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್ ಅವರು, ಸಂಸ್ಥೆಯ ಎಲ್ಲಾ ಉಪನ್ಯಾಸಕರು, ಸಿಬ್ಬಂದಿಯವರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿದರು. ಕಾಲೇಜಿನ 400 ಕ್ಕೂ ಹೆಚ್ಚು ಸಿಬ್ಬಂದಿಗೂ ಒಂದು ದಿನದ ವೇತನವನ್ನು ಮತದಾನ ಮಾಡಿ ಬಂದವರಿಗೆ ನೀಡುವುದಾಗಿ ಘೋಷಿಸಿದರು. ತನ್ಮೂಲಕ ಖಾಸಗಿ ಸಂಸ್ಥೆಗಳಲ್ಲಿ ಮತದಾನ ಮಾಡಲು ಉತ್ತೇಜನ ನೀಡುವ ಮೂಲಕ ಎಲ್ಲರಿಗೂ ಮಾದರಿಯಾದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ರಾಜೇಂದ್ರ ನಾಯ್ಡು, ನಿರ್ದೇಶಕರಾದ ಸೈಯದ್ ಷಂಷೀರ್, ಸುರೇಶ್, ಪ್ರದೀಪ್, ಪದ್ಮನಾಭ, ಜಗನ್‌ಮೋಹನರಾವ್ ಸೇರಿದಂತೆ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. 

error: Content is protected !!