ಕಾಶಿ ಜಗದ್ಗುರುಗಳಿಂದ ನಾಗರಾಜ್ ಲೋಕಿಕೆರೆಗೆ ಆಶೀರ್ವಾದ

ಕಾಶಿ ಜಗದ್ಗುರುಗಳಿಂದ  ನಾಗರಾಜ್ ಲೋಕಿಕೆರೆಗೆ ಆಶೀರ್ವಾದ

ದಾವಣಗೆರೆ, ಮೇ 2- ಖಾಸಗಿ ಕಾರ್ಯಕ್ರಮ ನಿಮಿತ್ತ ಇಂದು ನಗರಕ್ಕಾಗಮಿಸಿದ್ದ ವಾರಣಾಸಿಯ ಕಾಶಿ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಮಹಾಸ್ವಾಮಿಗಳನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು  ಭೇಟಿ ನೀಡಿ ಗುರುಗಳ ಕೃಪಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮುಖಂಡ ಎನ್.ಎ. ಮುರುಗೇಶ್ ಸೇರಿದಂತೆ ಇತರರು ಇದ್ದರು.

error: Content is protected !!