ಜಗಳೂರು ಮಾರಿಕಾಂಬೆಗೆ ಮೀಸಲು

ಜಗಳೂರು ಮಾರಿಕಾಂಬೆಗೆ ಮೀಸಲು

ಜಗಳೂರು, ಏ.26- ಪಟ್ಟಣದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ 5 ವರ್ಷಗಳ ನಂತರ ಏಪ್ರಿಲ್ 25 ರಿಂದ ಏಪ್ರಿಲ್ 28 ರವರೆಗೆ ಆರಂಭವಾಗಿದೆ. ಪಟ್ಟಣದ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ವಿದ್ಯುತ್ ದೀಪಗಳಿಂದ ನಗರ ಅಲಂಕಾರಗೊಂಡಿದೆ.

ಏಪ್ರಿಲ್ 25 ರಂದು ಗಂಗಾಪೂಜೆ  ದೇವಿ ಉತ್ಸವ ಮೂರ್ತಿ ಮೆರವಣಿಗೆ  ವಾದ್ಯ ವೃಂದಗಳೊಂದಿಗೆ ಬೊಂಬೆ ಕುಣಿತಕ್ಕೆ ಹೆಜ್ಜೆ ಹಾಕುತ್ತಾ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು.ಬುಧವಾರ ಸಹಸ್ರಾರು ಭಕ್ತ ಸಮೂಹದಿಂದ‌ ಮೀಸಲು ಅರ್ಪಣೆ ಮಾಡಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ವಿಶೇಷ ಪೂಜೆ ಸಲ್ಲಿಕೆ, ಹರಕೆ ತೀರಿಸುವಿಕೆ, ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಏಪ್ರಿಲ್ 28 ರ ಶುಕ್ರವಾರ ಸಂಜೆ ವೈಭವದಿಂದ ರಥೋತ್ಸವ ನಡೆಯಲಿದೆ. ಇಂದು ಮತ್ತು ನಾಳೆ ಬೆಳಿಗ್ಗೆ  ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

error: Content is protected !!