ಚುನಾವಣೆ : ಪೊಲೀಸ್ ವೀಕ್ಷಕರಾಗಿ ತ್ರಿಪಾಠಿ

ದಾವಣಗೆರೆ, ಏ.26- ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು   ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ದಾವಣಗೆರೆ ಜಿಲ್ಲೆಗೆ ಹಿರಿಯ ಪೊಲೀಸ್ ಅಧಿಕಾರಿ ಸರ್ವಶ್ರೇಷ್ಟ ತ್ರಿಪಾಠಿ ಅವರನ್ನು ಪೊಲೀಸ್ ವೀಕ್ಷಕರನ್ನಾಗಿ ನೇಮಕ ಮಾಡಿದೆ ಎಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.  

ಜಿಲ್ಲೆಯ ಎಲ್ಲಾ 7 ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸರ್ವಶ್ರೇಷ್ಟ ತ್ರಿಪಾಠಿ ಆಗಮಿಸಿದ್ದು, ಅವರ ಇ-ಮೇಲ್ [email protected], ಮೊಬೈಲ್ : 91130 26740 ಆಗಿರುತ್ತದೆ. ಅವರು ದಾವಣಗೆರೆ ಸರ್ಕ್ಯೂಟ್‍ಹೌಸ್‍ನಲ್ಲಿ ಪ್ರತಿದಿನ ಬೆಳಿಗ್ಗೆ 8 ರಿಂದ 9 ರವರೆಗೆ ಲಭ್ಯರಿ ರುವರು. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಮಾಹಿತಿ, ದೂರುಗಳಿದ್ದಲ್ಲಿ ಅವರಿಗೆ ನೀಡಬಹುದಾಗಿದೆ.

error: Content is protected !!