ನಗರದಲ್ಲಿ ಇಂದು ಮಕ್ಕಳಿಗೆ ಬೇಸಿಗೆ ಶಿಬಿರ

ನೇತಾಜಿ ಸ್ಕೌಟ್ಸ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್  ವತಿಯಿಂದ ಇಂದಿನಿಂದ ಇದೇ ದಿನಾಂಕ 29 ರವರೆಗೆ ವಿವಿಧ ಕಾರ್ಯಕ್ರಮಗಳನ್ನೊಳಗೊಂಡ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

ಇಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ ಜಗನ್ನಾಥ್ ನಾಡಿಗರ್ ರವರಿಂದ ದೇಶಪ್ರೇಮ ಹಾಗೂ ಮಧ್ಯಾಹ್ನ 12 ರಿಂದ 1 ರವರೆಗೆ  ಸಾಲಿಗ್ರಾಮ ಗಣೇಶ್ ಶೆಣೈ ರವರಿಂದ ಶಿಕ್ಷಣ ಪದ್ದತಿ ಕುರಿತಂತೆ  ಕಾರ್ಯಕ್ರಮಗಳು ನಡೆಯುತ್ತವೆ ಎಂದು ನೇತಾಜಿ ಸ್ಕೌಟ್ಸ್ ಗ್ರೂಪ್ ನಾಯಕ ಜೆ.ಎಸ್. ವಿಜಯ್, ಚೇತನ್ ಗೈಡ್ ಗ್ರೂಪ್ ನಾಯಕರಾದ ಕಾವೇರಿ ತಿಳಿಸಿದ್ದಾರೆ.

ನಾಳೆ ಶನಿವಾರ ಬೆಳಿಗ್ಗೆ 9.30 ರಿಂದ 10.30 ರವರೆಗೆ ಟಿ.ಎಸ್ ಶಿವಣ್ಣ ರವರಿಂದ ಗಂಟುಗಳು ಮತ್ತು ಕಟ್ಟುಗಳು, ಬೆ. 10.30 ರಿಂದ 11.30 ರವರೆಗೆ ಸಂಚಾರಿ ಅಧಿಕಾರಿ ಜಯ್ಯಪ್ಪ ನಾಯ್ಕ್ ಬಿ.ಎಸ್ ರವರಿಂದ ಸಂಚಾರಿ ನಿಯಂತ್ರಣ ತರಬೇತಿ,  ಮಧ್ಯಾಹ್ನ 12 ರಿಂದ 1 ರವರೆಗೆ  ಜಗನ್ನಾಥ್ ನಾಡಿಗರ್ ರವರಿಂದ ಕೌಶಲ್ಯ ಅಭಿವೃದ್ಧಿ ಕುರಿತ  ಕಾರ್ಯಕ್ರಮಗಳು ನಡೆಯುತ್ತವೆ.

error: Content is protected !!